ಮಾನವೀಯತೆ ಮೆರೆದ ಸಚಿವ! ಮಾಡಿದ್ದೇನು ನೋಡಿ

varthajala
0

 



ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾನವೀಯತೆ ಮೆರೆದಿದ್ದಾರೆ, ಹೌದು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ಸರ್ಕಾರಿ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದ ಸಚಿವರು ಸಮಯಕ್ಕೆ ಸರಿಯಾಗಿ ಬಂದು ವ್ಯಕ್ತಿಯ ಜೀವ ಕಾಪಾಡಿದ್ದಾರೆ,

ಭಾನುವಾರ ತಮ್ಮ ಕುಬಟೂರು ನಿವಾಸದಿಂದ ಹೊಸನಗರದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಮಧು ಬಂಗಾರಪ್ಪ ಹೊರಟಿದ್ದರು, ಸೊರಬ ತಾಲೂಕಿನ ಕುಪ್ಪಗುಡ್ಡೆ ಗ್ರಾಮದ ಬೈಕ್‌ನಲ್ಲಿ ಹೊರಟಿದ್ದ ಗಂಡ ಹೆಂಡತಿ ಹಾಗೂ ಮಗು ಅಪಘಾತದಲ್ಲಿ ಗಾಯಗೊಂಡು ಸಹಾಯದ ನಿರೀಕ್ಷೆಯಲ್ಲಿ ರಸ್ತೆ ಬದಿ ನಿಂತಿದರು,
ಇದನ್ನು ಕಂಡ ತಕ್ಷಣ ಸಚಿವರು ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ನೀರು ಕುಡಿಸಿ, ತಮ್ಮ ವಾಹವದಲ್ಲಿಯೇ ಸೊರಬ ಆಸ್ಪತ್ರೆಗೆ ರವಾನಿಸಿದರಲ್ಲದೆ, ಅಪಘಾತ ಮಾಡಿದ ಬೈಕ್ ಸವಾರನನ್ನು ಹುಡುಕುವಂತೆಯೂ ಪೊಲೀಸರಿಗೆ ಸೂಚಿಸಿ ಬೇರೆ ವಾಹನದಲ್ಲಿ ಹೊಸನಗರಕ್ಕೆ ತೆರಳಿದರು, ಗಾಯಾಳುಗಳು ಆರೋಗ್ಯ ವಿಚಾರಿಸಿ ತಮಗೆ ತಿಳಿಸುವಂತೆಯೂ ತಮ್ಮ ಸಹಾಯಕರಿಗೆ ಮಧು ಬಂಗಾರಪ್ಪ ಸೂಚಿಸಿದರು,

Post a Comment

0Comments

Post a Comment (0)