ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.26 ರಂದು ಏರ್ಪಡಿಸಿದ್ದ ಊಂಜಲ್ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಸಹನಾ ವಾದಿರಾಜ್ ಅನ್ನಮಾಚಾರ್ಯರ ಕೀರ್ತನೆಗಳನ್ನೂ ಹಾಗೂ ಹರಿದಾಸರ ಪದಗಳನ್ನೂ ಪ್ರಸ್ತುತಪಡಿಸಿದರು. ವಿ|| ಎಂ.ಎಸ್.ಗೋವಿಂದಸ್ವಾಮಿ (ಪಿಟೀಲು), ವಿ|| ಮುರಳಿ ನಾರಾಯಣರಾವ್ (ಮೃದಂಗ) ಸಾಥ್ ನೀಡಿದರು. ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಂದನಾರ್ಪಣೆ ಮಾಡಿದರು.
Post a Comment
0Comments