ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ಭೀಕರ ಹತ್ಯಾಕಾಂಡಕ್ಕೆ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದು, ಇದೀಗ ಭಾರತೀಯ ಸೇನೆ ಉಗ್ರರ ಹುಟ್ಟಡಗಿಸುವುದಾಗಿ ಪಣತೊಟ್ಟಿದೆ, ಅದರಂತೆ ಕಾರ್ಯಚರಣೆ ಆರಂಭಿಸಿದ ಸೇನೆ ಲಷ್ಕರ್-ಎ-ತೈಯ್ಬಾ ಕಮಾಂಡರನ್ನು ಹೊಡೆದುರುಳಿಸಿದೆ,
ಇಂದು ಕಾಶ್ಮೀರದಲ್ಲಿ ಬಂಡಿಪುರದಲ್ಲಿ ನಡೆದ ಯೋಧರ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದೆ, ಈ ದಾಳಿಯಲ್ಲಿ ಲಷ್ಕರ್-ಎ-ತೈಯ್ಬಾ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಸೇನೆ ಹೊಡೆದುರುಳಿಸಿದೆ,
ಯೋಧರ ಈ ಕಾರ್ಯಾಚರಣೆಯಲ್ಲಿ ವೇಳೆ ಒಬ್ಬ ಯೋಧ ಹಾಗೂ ಇಬ್ಬರು ಪೊಲೀಸರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ವರದಿಯಾಗಿದೆ,