ಸಾಯಿ ಬಾಬಾ ಪಾದುಕೆ ದರ್ಶನ ಪಡೆದ ಭಕ್ತರು

varthajala
0
-ಬೆಂಗಳೂರಿನ ಹಳೆಯ ದೇವಾಲಗಳಲ್ಲಿ ಒಂದಾದ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಶ್ರೀ ಸಾಯಿ ಮಡಳಿಯ ಸಾಯಿಮಂದಿರ ಸಾಯಿಬಾಭರವರ ಮೂಲ ಪಾದುಕೆ ದರ್ಶನ ಉತ್ಸವವನ್ನ ದಿನಾಂಕ 17, 18ಮೇ 2025ರ
ಗುರುವಾರ ಮತ್ತು ಶುಕ್ರವಾರಗಳಂದು ಏರ್ಪಡಿಸಿತ್ತು.


 ಶಿರಡಿಯಿಂದ ಆಗಮಿಸಿದ ಪಾಡುಕೆಗಳನ್ನ ಮಲ್ಲೇಶ್ವರಂ ಪದವಿಪೂರ್ವ ಶಿಕ್ಷಣ ಇಲಾಖೆ ಸನಿಹದಿಂದ 14 ನೇ ತಿರುವಿನಲ್ಲಿರುವ ಸಾಯಿ ಮಂದಿರಕ್ಕೆ ಉತ್ಸವ ಮೆರವಣಿಗೆ ಮುಖಾಂತರ ತಂದು ಸಾರ್ವಜನಿಕ ಭಕ್ತರ ದರ್ಶನಕ್ಕೆ ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಇಡಲಾಗಿತ್ತು. ಸಾವಿರಾರು ಭಕ್ತರು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಬಾಬಾರವರ ಪಾದುಕೆ ದರ್ಶನ ಪಡೆಅದು ಪುನೀತರಾದರು. ಅನೇಕ ಗಣ್ಯರು ಸಹ ಆಗಮಿಸಿ ದರ್ಶನ ಪಡೆದರು  ಎರಡು ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.
 ಶಿರಡಿ ಸಂಸ್ಥಾನದ ಸಿ ಇ ಓ ಗೋರಕ್ಷ ಗಡಿಲ್ಕರ್ ಅಲ್ಲಿನ ಮಾಧ್ಯಮ ಸಿಬ್ಬಂದಿ, ಅರ್ಚಕರು ಸೇರಿದಂತೆ 25 ಜನ ಸಿಬ್ಬಂದಿ ಇಲ್ಲೇ ಬಿಡು ಬಿಟ್ಟಿದ್ದರು. ಹಿರಿಯ ನಾಗರಿಕರಿಗೆ ವಿಶೇಷ ಪ್ರವೇಶ ಕಲ್ಪಿಸಲಾಗಿತ್ತು. ಎಂದು ಸಾಯಿ ಮಂಡಳಿ ಅಧ್ಯಕ್ಷ ಡಾ. ಕೆ ನಾಗೇಶ್ ಮತ್ತು ಗೌ. ಕಾರ್ಯದರ್ಶಿ ಪ್ರಕಾಶ್ ರಾವ್ ತಿಳಿಸಿದರು. ಭಕ್ತರಿಗೆ ಕುಡಿಯುವ ನೀರು ಪ್ರಸಾದ, ತುರ್ತು ಚಿಕಿತ್ಸೆ, ಆಂಬುಲೆನ್ಸ್ ಮತ್ತು ಅನಾಹುತಗಳು ಆಗದಂತೆ ಎಲ್ಲಾ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡಲಾಗಿತ್ತು.

Post a Comment

0Comments

Post a Comment (0)