ಬೆಂಗಳೂರು: ಕರ್ನಾಟಕ ಸರ್ಕಾರವು ನಂದಿ ಬೆಟ್ಟದಲ್ಲಿ ಮಹತ್ವಾಕಾಂಕ್ಷೆಯ ರೋಪ್ವೇ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿರುವುದರಿಂದ, ರಾಜ್ಯ ಪ್ರವಾಸೋದ್ಯಮ ಇಲಾಖೆಯು ಮೇ 2025 ರಲ್ಲಿ ಶಿಲಾನ್ಯಾಸ ಮಾಡು ಸಾಧ್ಯತೆಯಿದೆ.
ಪರಿಸರವಾದಿಗಳು ಮತ್ತು ಸಂರಕ್ಷಣಾವಾದಿಗಳ ಅಸಮಾಧಾನದ ಕಾರಣದಿಂದ ರಾಜ್ಯ ಅರಣ್ಯ ಇಲಾಖೆ ಷರತ್ತುಗಳೊಂದಿಗೆ ಅನುಮತಿ ನೀಡಿದೆ. ಇದಾದ ನಂತರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ನಿರ್ವಹಿಸುವ ಪರಿವೇಶ್ ಪೋರ್ಟಲ್ನಲ್ಲಿ ಯೋಜನೆಯ ಅನುಮತಿಗಾಗಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
ಚಿಕ್ಕಬಳ್ಳಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸಿ. ಗಿರೀಶ್ ಮಾತನಾಡಿ, ಅರಣ್ಯ ತೆರವಿಗೆ ಕನಿಷ್ಠ ಮರ ಕಡಿಯುವುದು, ಕೊರೆಯುವುದು ಬೇಡ, ಬ್ಲಾಸ್ಟಿಂಗ್ ಬೇಡ, ಕಾಡಿನೊಳಗೆ ಜೆಸಿಬಿಗಳನ್ನು ಬಳಸಬಾರದು ಮತ್ತು ಯಾವುದೇ ರೀತಿಯ ರಸ್ತೆ ನಿರ್ಮಾಣ ಬೇಡ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಅರಣ್ಯ ಸಿಬ್ಬಂದಿ ಮತ್ತು ತಜ್ಞರ ಮೇಲ್ವಿಚಾರಣೆಯಲ್ಲಿ ಸ್ಥಳದಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸಲು ಅನುಮತಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2.93 ಕಿ.ಮೀ ಉದ್ದದ ಈ ರೋಪ್ವೇ ನಿರ್ಮಾಣಕ್ಕೆ ಕೆಳ ಟರ್ಮಿನಲ್ನಲ್ಲಿ ಏಳು ಎಕರೆ ಭೂಮಿ ಬೇಕಾಗುತ್ತದೆ, ಅದರಲ್ಲಿ 86 ಗುಂಟೆ ಅರಣ್ಯ ಭೂಮಿ. ನಂದಿ ಬೆಟ್ಟದ ಮೇಲೆ ಎರಡು ಎಕರೆ ಭೂಮಿ ಬೇಕಾಗುತ್ತದೆ, ಅಲ್ಲಿ ರೋಪ್ವೇ ಕೊನೆಗೊಳ್ಳುತ್ತದೆ. ಒಟ್ಟು ಯೋಜನಾ ವೆಚ್ಚ 93.40 ಕೋಟಿ ರೂ.ಗಳಾಗಿದ್ದು, 24 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ಅಂತಿಮ ಯೋಜನಾ ವರದಿಯ ಪ್ರಕಾರ, ಅರಣ್ಯ ಭೂಮಿಯಲ್ಲಿರುವ ಒಂದು ನೀಲಗಿರಿ ಮರ ಮತ್ತು ಹುಣಸೆ ಮರವನ್ನು ಕತ್ತರಿಸಲಾಗುತ್ತದೆ. ಸ್ವಾಧೀನಪಡಿಸಿಕೊಳ್ಳಬೇಕಾದ ಖಾಸಗಿ ಭೂಮಿಯಲ್ಲಿ ಯಾವುದೇ ಮರಗಳಿಲ್ಲ. ಪರಿಸರ ಅನುಮತಿಗಾಗಿ ಕಾಯಲಾಗುತ್ತಿದೆ, ಭೂಸ್ವಾಧೀನ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಯಾವುದೇ ಬ್ಲಾಸ್ಟಿಂಗ್ ಅಥವಾ ಕೊರೆಯುವಿಕೆ ಮಾಡಲಾಗುವುದಿಲ್ಲ. ಪೂರ್ವ-ಜೋಡಣೆ ಮಾಡಿದ ಕಂಬಗಳನ್ನು ಮಾತ್ರ ಸ್ಥಳದಲ್ಲಿ ತಂದು ಸ್ಥಾಪಿಸಲಾಗುತ್ತದೆ ಎಂದು ರಾಜೇಂದ್ರ ಹೇಳಿದರು.