ಸುಧೀಂದ್ರನಗರ ರಾಯರ ಮಠದಲ್ಲಿ ಋಗ್ವೇದ ಸಂಹಿತೆ ಹೋಮ ಮತ್ತು ಪ್ರವಚನ ಮಾಲಿಕೆ

varthajala
0

ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 404ನೇ ಪಟ್ಟಾಭಿಷೇಕ ಮತ್ತು 430ನೇ ವರ್ಧಂತಿ ಮಹೋತ್ಸವ ಪ್ರಯುಕ್ತ ಫೆಬ್ರವರಿ 28 ರಿಂದ ಮಾರ್ಚ್ 6ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 

ಫೆಬ್ರವರಿ 28, ಮಾರ್ಚ್ 1 ಮತ್ತು 2ರಂದು ಋಗ್ವೇದ ಸಂಹಿತೆ ಹೋಮ ಜರುಗಲಿದ್ದು, ಈ ಹೋಮದ ಪೂರ್ಣಾಹುತಿಯು ಮಾರ್ಚ್ 3ರಂದು  ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಮಾಧವತೀರ್ಥ ಮೂಲಮಠದ ತಂಬಿಹಳ್ಳಿ ಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದಂಗಳವರಿಂದ ಅಮೃತ ಹಸ್ತದಿಂದ ಹೋಮದ ಪೂರ್ಣಾಹುತಿ ನಡೆಯಲಿದ್ದು, ಆ ದಿನವೇ ಶ್ರೀಗಳಿಂದ ಸಂಸ್ಥಾನ ಪೂಜೆ ಮತ್ತು ಭಿಕ್ಷೆ ನಡೆಯಲಿದೆ.

ಪ್ರವಚನ ಮಾಲಿಕೆ : (ಪ್ರತಿದಿನ ಸಂಜೆ 6-30ಕ್ಕೆ). ಮಾರ್ಚ್ 1-ಶ್ರೀ ಬ್ರಹ್ಮಣ್ಯಾಚಾರ್, ಮಾರ್ಚ್ 2-ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಮಾರ್ಚ್ 3-ಶ್ರೀ ಮರುತಾಚಾರ್,  ಮಾರ್ಚ್ 4-ಶ್ರೀ ಚಂದ್ರಶೇಖರಾಚಾರ್, ಮಾರ್ಚ್ 5-ಶ್ರೀ ಕಲ್ಯಾ ಶ್ರೀಕಾಂತಾಚಾರ್ ಮತ್ತು ಮಾರ್ಚ್ 6-ಶ್ರೀ ಆಯನೂರು ಮಧುಸೂದನಾಚಾರ್ ಇವರುಗಳು ರಾಯರ ಜೀವನ ಚರಿತ್ರೆ ಬಗ್ಗೆ, ರಾಯರ ಮಹಿಮೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀಮಠದ ಗೌರವ ಕಾರ್ಯದರ್ಶಿ ಶ್ರೀ ನರಹರಿ ರಾವ್ ತಿಳಿಸಿದ್ದಾರೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003

Post a Comment

0Comments

Post a Comment (0)