ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ, ಇಲ್ಲ ಅಂದ್ರೆ ಸರ್ಕಾರ ವಿಸರ್ಜಿಸಿ:ವಿನಯ್ ಕುಮಾರ್ ಜಿ.ಬಿ ಆಗ್ರಹ

varthajala
0

ಕೆಪಿಎಸ್ ಸಿಯ ಭ್ರಷ್ಟ ವ್ಯವಸ್ಥೆಯಿಂದಾಗಿ ಲಕ್ಷಾಂತರ ಪದವೀಧರರು ಅವಕಾಶ ವಂಚಿತರಾಗುತಿದ್ದಾರೆ. 

ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ರಾಜ್ಯದ ವಿದ್ಯಾಂವಂತ ವರ್ಗದ ವಿಶ್ವಾಸಾರ್ಹತೆಯನ್ನು ಕೆಪಿಎಸ್ ಸಿಯನ್ನು ಕಳೆದುಕೊಂಡಿದೆ. ಕೆಪಿಎಸ್ ಸಿ ಕ್ಯಾನ್ಸರ್ ನ ಫೈನಲ್ ಸ್ಟೇಜ್ ತಲುಪಿದೆ ಇದಕ್ಕೆ ಮೇಜರ್ ಸರ್ಜರಿ ಬೇಕಿದೆ. ತುರ್ತಾಗಿ ಔಷಧಿ ಪೂರೈಕೆ ಮಾಡದಿದ್ದರೆ ಸರ್ಕಾರದ ಇಡೀ ದೇಹಕ್ಕೆ ಹರಡಲಿದೆ ಹಾಗಾಗಿ ಈ ಕೂಡಲೆ ಸರ್ಕಾರ ಕೆಪಿಎಸ್ ಸಿ ನೇಮಕಾತಿ ಸಂಬಂಧ ಮರು ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಇದಕ್ಕೆಲ್ಲಾ ಸರ್ಕಾರದ ಇಚ್ಚಾಶಕ್ತಿಯ ಕೊರತೆಯೇ ಮೂಲ ಕಾರಣ ಎಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಅಕ್ಸರ ಸಂಘಟನೆಯ ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ. ಎಚ್ಚರಿಕೆ ನೀಡಿದರು. 

ಡಿಸೆಂಬರ್ 29ರಂದು ನಡೆದ ಮರುಪರೀಕ್ಷೆಯಲ್ಲಿ ಎರಡನೇ ಬಾರಿಗೆ ಕನ್ನಡ ಭಾಷಾಂತರ ಲೋಪ ಎಸಗಿಲಾಗಿದ್ದು, ಈ ಸಂಬಂಧ ರಾಜ್ಯದ ಇತರೆ ವಿದ್ಯಾರ್ಥಿ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸರ್ಕಾರ ಎರಡು ದಿನಗಳ ಕಾಲಾವಾಶವನ್ನು ಪಡೆದುಕೊಂಡಿದ್ದರು, ಇದಾದ ಬಳಿಕ 9 ದಿನ ಕಳೆದರೂ ಸರ್ಕಾರ ಮೌನ ವಹಿಸಿಸಿದೆ. ಈ ಜಾಣ ಮೌನವನ್ನು ಮುರಿದು ಸಮಸ್ಯೆ ಸರಿಪಡಿಸದಿದ್ದರೆ ರಾಜ್ಯದ ಜನತೆ ಧಂಗೆ ಏಳಲಿದ್ದಾರೆ. ಕೆಪಿಎಸ್ ಸಿ ಇಂದ ರಾಜ್ಯದ ಜನತೆಗೆ ತುಂಬಾ ಅನ್ಯಾಯವಾಗಿದೆ ಸಂಸ್ಥೆಯ ಮೇಲೆ ನಂಬಿಕೆ ಬರುವಂತ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಯುಪಿಎಸ್ ಸಿ ಮಾದರಿಯನ್ನು ಕೆಪಿಎಸ್ ಸಿ ಅನುಸರಿಸಬೇಕು. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಕೆಪಿಎಸ್ ಸಿ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಬೇಕು, ವಿಶೇಷ ಭಾಷಾಂತರ ಶಾಖೆಯನ್ನು ಹೊಂದಬೇಕು, ನೇಮಕಾತಿ ಸಂಬಂಧ ವಾರ್ಷಿಕ ಕ್ಯಾಲೆಂಡರ್ ಹೊರಡಿಸಬೇಕು, ನೇಮಕಾತಿ ಪ್ರಕ್ರಿಯೆಯನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂಬ ಸಲಹೆಗಳನ್ನು ನೀಡಿದರು. 

ಈ ವೇಳೆ ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಮರೂರು, ಕಾರ್ಯಾಧ್ಯಕ್ಷರಾದ ಲೋಕೇಶ್ ರಾಮ್, ಪ್ರಧಾನ ಕಾರ್ಯದರ್ಶಿ ಪವನ್ ಮಹಾರಾಜ್, ಮಹಿಳಾ ಕಾರ್ಯದರ್ಶಿ ಪವಿತ್ರಾ ಕೋಲಾರ ಉಪಸ್ಥಿತರಿದ್ದರು.

Post a Comment

0Comments

Post a Comment (0)