ಎಪಿಎಸ್ ಶಿಕ್ಷಣ ಸಂಸ್ಥೆಯಿಂದ ಸೋಮನಹಳ್ಳಿಯ ಅನಂತ ಗಂಗೋತ್ರಿಯಲ್ಲಿ ಬಿಬಿಎಂ, ಬಿಸಿಎ ಕೋರ್ಸ್ ಆರಂಭ

varthajala
0

 ಬೆಂಗಳೂರು ; ಎ ಪಿ ಎಸ್ ಶಿಕ್ಷಣ ಸಂಸ್ಥೆಯಿಂದ ಸೋಮನಹಳ್ಳಿಯ ಅನಂತ ಜ್ಞಾನ ಗಂಗೋತ್ರಿ ಆವರಣದಲ್ಲಿ 2024-25ನೇ ಶೈಕ್ಷಣಿಕ ಸಾಲಿನಿಂದ ಎಂ.ಬಿ.ಎ, ಎಂ.ಸಿ.ಎ ಮತ್ತು ಬಿಕಾಂ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ  ಸಿ ಎ ಡಾ.ವಿಷ್ಣುಭರತ್ ಅಲಂಪಲ್ಲಿ ತಿಳಿಸಿದ್ದಾರೆ. 

ಹೊಸ ಕೋರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಒಟ್ಟು 10000 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದು, ಪಿಯು ಕಾಲೇಜು ಶೇ.98 ರಷ್ಟು ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಕಷ್ಟು ಶೈಕ್ಷಣಿಕ ಸೌಲಭ್ಯಗಳನ್ನು ನೀಡಲಾಗಿದೆ ಎಂದರು. 

ಎ ಪಿ ಎಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೋ ಎ ಪ್ರಕಾಶ್ ಮತ್ತು  ಸೋಮನಹಳ್ಳಿ ವಿಭಾಗದ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎ ಆರ್ ಆಚಾರ್ಯ, ಪ್ರೋ ಕೆ ಪಿ ನರಸಿಂಹಮೂರ್ತಿರವರು, ಎ ಆರ್ ಮಂಜುನಾಥ್, ಶ್ರೀ ಕೃಷ್ಣಸ್ವಾಮಿ, ಡಾ.ರಾಮ್ ಪ್ರಸಾದ್ ಕಾಲೇಜಿನ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

Post a Comment

0Comments

Post a Comment (0)