ದಸರಾ ಮಹೋತ್ಸವದ ಪ್ರಯುಕ್ತ ಭಕ್ತಿ ಗೀತೆ, ಭಾವಗೀತೆ ಮತ್ತು ಜನಪದ ಗೀತೆ ಕಾರ್ಯಕ್ರಮ

varthajala
0

 ಬೆಂಗಳೂರಿನ ಮಲ್ಲೇಶ್ವರದ ಈಸ್ಟ್ ಲಿಂಕ್ ರಸ್ತೆಯಲ್ಲಿರುವ ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ದಸರಾ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ 11, ಶುಕ್ರವಾರ ಸಂಜೆ ಶ್ರೀಮತಿ ರಮ್ಯಾ ಸುಧೀರ್ ಅವರ ನಿರ್ದೇಶನದಲ್ಲಿ ಗಾನ ಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಭಕ್ತಿ ಗೀತೆ, ಭಾವಗೀತೆ ಮತ್ತು ಜನಪದ ಗೀತೆಗಳನ್ನು ಹಾಡಿದರು. 


ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಟಿ.ಎಸ್. ರಮೇಶ್, ತಬಲಾ ವಾದನದಲ್ಲಿ ಶ್ರೀ ಎಂ. ಮೋಹನ್ ಸಾಥ್ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿಶಂಕರ್ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಮಾಲಿನಿ ರವಿಶಂಕರ್ ಅವರು ಕಾರ್ಯಕ್ರಮವನ್ನು ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿದರು.


Post a Comment

0Comments

Post a Comment (0)