ಜಿಲ್ಲಾ ಲಯನ್ಸ್ ಸಂಸ್ಥೆ ವತಿಯಿಂದ ದೊಡ್ಡ ಬಾನಸವಾಡಿಯ ಕರ್ನಾಟಕ ಪಬ್ಲಿಕ್ ಶಾಲೆ ಮಕ್ಕಳಿಗೆ ಪೆನ್ಸಿಲ್ ಕಿಟ್

varthajala
0

ಜಿಲ್ಲಾ ಲಯನ್ಸ್ ಸಂಸ್ಥೆ ವತಿಯಿಂದ ದೊಡ್ಡ ಬಾನಸವಾಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಿಗೆ ಪೆನ್ಸಿಲ್ ಕಿಟ್ಟನ್ನು ವಿತರಿಸಲಾಯಿತು.




ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ನೆರವೇರಿಸಿದರು. ಉಪರಾಜ್ಯಪಾಲರಾದ ರಾಜು ಚಂದ್ರಶೇಖರ್, ಪಿ.ಆರ್.ಓ. ಅಜಿತ್ ಬಾಬು, ಜಿ.ಎಸ್. ಮಂಜುನಾಥ್, ರವಿಚಂದ್ರನ್, ರಾಧಾಕೃಷ್ಣಹೆಗಡೆ ಶಾಲಾ ಪ್ರಿನ್ಸಿಪಾಲ್ ವೆಂಕಟೇಶ್ ಮುಂತಾದವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಲಯನ್ ಸೇವಾ ಅಧ್ಯಕ್ಷ ಅಜಿತ್ ಬಾಬು ಹಾಗೂ ಲಯನ್ಸ್ ಸಂಸ್ಥೆಗಳಾದ ಕುಮಾರ ಪಾರ್ಕ್, ಜಯಮಹಲ್, ಆದಿತ್ಯನಗರ್, ಬಂಜಾರ, ಅರ್ಚರ್, ಕನಕನಗರ, ಸರ್ವಜ್ಞನಗರ  ಸಂಸ್ಥೆಗಳು ಈ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ್ದವು.

Post a Comment

0Comments

Post a Comment (0)