ವಿದುಷಿ ಶ್ರೀಮತಿ ವಿಜಯಾ ಭಟ್ ಕು|| ಅಭಿಜ್ಞ ಕಶ್ಯಪ್ ಇವರಿಂದ "ದಾಸರ ಪದಗಳ ಗಾಯನ"

varthajala
0

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಸೆಪ್ಟೆಂಬರ್ 26, ಗುರುವಾರ ಸಂಜೆ 7-30ಕ್ಕೆ ವಿದುಷಿ ಶ್ರೀಮತಿ ವಿಜಯಾ ಭಟ್ ಮತ್ತು ಅವರ ಶಿಷ್ಯೆ ಕು|| ಅಭಿಜ್ಞ ಕಶ್ಯಪ್ ಇವರಿಂದ "ದಾಸರ ಪದಗಳ ಗಾಯನ" ಕಾರ್ಯಕ್ರಮ ಏರ್ಪಡಿಸಿದೆ.

ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿದುಷಿ ಭಾರ್ಗವಿ ಮತ್ತು ಮೃದಂಗ ವಾದನದಲ್ಲಿ ವಿದ್ವಾನ್ ನಟರಾಜ್ ಸಾಥ್ ನೀಡಲಿದ್ದಾರೆ ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 5ನೇ ಬಡಾವಣೆ, ಜಯನಗರ, ಬೆಂಗಳೂರು-41

Post a Comment

0Comments

Post a Comment (0)