ಹೊಸಕೋಟೆ ಲಯನ್ ಸಂಸ್ಥೆಯಿಂದ ಪತ್ರಿಕಾ ವಿತರಕರಿಗೆ ರೈನ್ ಕೋಟ್

varthajala
0

 ಹೊಸಕೋಟೆ ಲಯನ್  ಸಂಸ್ಥೆಯಿಂದ ಪತ್ರಿಕಾ ವಿತರಕರಿಗೆ ರೈನ್ ಕೋಟ್ ವಿತರಣೆ ಮಾಡಲಾಯಿತು.


       ಮಳೆ ಗಾಳಿ  ಚಳಿ ಎನ್ನದೆ ಮನೆ ಮನೆಗೆ ಪತ್ರಿಕೆ ಹಾಕುವ  ಹುಡುಗರಿಗೆ ಹಾಗೂ ಪತ್ರಿಕಾ ಏಜೆಂಟರಿಗೆ ಜಿಲ್ಲಾ ಪಿ. ಆರ್. ಓ. ಹಾಗೂ ಹುಮೇಟಿರಿಯನ್ ಡಿ. ಸಿ. ಅಜಿತ್ ಬಾಬು ರೈನ್ ಕೋಟ್ ವಿತರಿಸಿದರು.

ಲಯನ್ ಸಂಸ್ಥೆಯು ನಿರಂತರವಾಗಿ ಸಮಾಜದಲ್ಲಿನ ಶ್ರಮಿಕ ವರ್ಗದವರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ ಎಂದು ತಿಳಿಸಿದರು. 

   ಲಯನ್ ಜಿಲ್ಲಾ ಪಿ. ಆರ್. ಓ. ಜಿ.ಎಸ್. ಮಂಜುನಾಥ್ ಮಾತನಾಡಿ ಅಜಿತ್ ಬಾಬುರವರು ಜಿಲ್ಲೆಯಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ ಅದರಂತೆ ನಮ್ಮ ಲಯನ್ ಸಂಸ್ಥೆಯು ಇನ್ನೂ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಬಡ ಜನಕ್ಕೆ ನೆರವಾಗುತ್ತಿದೆ ಎಂದು ತಿಳಿಸಿದರು. 

  ಲಯನ್ ಸಂಸ್ಥೆ ಅಧ್ಯಕ್ಷ ಎಂ. ಬೀರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಹೊಸಕೋಟೆ ಲಯನ್ ಸಂಸ್ಥೆ ಇನ್ನೂ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿ.ಎನ್. ಮಂಜುನಾಥ್ ಹಾಗೂ ಹೊಸಕೋಟೆ ಲಯನ್ ಸಂಸ್ಥೆಯ ಪದಾಧಿಕಾರಿಗಳು, ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

Post a Comment

0Comments

Post a Comment (0)