ಬೆಂಗಳೂರಿನಲ್ಲಿ ಮೂರು ದಿನಗಳ 5ನೇ ರೀ ಕಾಮರ್ಸ್ ಎಕ್ಸ್ ಪೋ ಗೆ ಚಾಲನೆ

varthajala
0

 ಬೆಂಗಳೂರು; ಪ್ರಕೃತಿಗೆ ತೀವ್ರ ಹಾನಿಯುಂಟು ಮಾಡುತ್ತಿರುವ ತ್ಯಾಜ್ಯವನ್ನು ಮರು ಸಂಸ್ಕರಣೆಪುನರ್ ಬಳಕೆಪುನರ್ ನಿರ್ಮಾಣ ಮಾಡುವ ಮತ್ತು ಜಾಗತಿಕ ಹವಾಮಾನ ಬದಲಾವಣೆ ತಡೆಗಟ್ಟುವ ಹಿನ್ನೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಅರಣ್ಯಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

                               

ನಗರದ ಲಲಿತ್ ಅಶೋಕದಲ್ಲಿ 5ನೇ ರೀ ಕಾಮರ್ಸ್ ಎಕ್ಸ್ ಪೋ ಗೆ ಶುಭ ಕೋರಿ  ಮಾತನಾಡಿದ ಅವರು, ಪರಿಸರ ಸಂರಕ್ಷಣೆಗೆ ಇ ತ್ಯಾಜ್ಯ, ಬ್ಯಾಟರಿ, ಯಂತ್ರೋಪಕರಣಗಳ ಮರುಬಳಕೆ ಸಂಸ್ಕರಣೆ, ಪುನರ್ ನಿರ್ಮಾಣ, ಪುನರ್ ಸ್ಥಾಪನೆ ಅತ್ಯಂತ ಅಗತ್ಯವಾಗಿದೆ. ಇದರಿಂದ ಆರ್ಥಿಕವಾಗಿಯೂ ಹಿತವಾಗಲಿದ್ದು, ಪರಿಸರ ಸಂರಕ್ಷಣೆಯಾಗಲಿದೆ ಎಂದರು.

                             

 

ಜಗತ್ತಿನಲ್ಲಿ ಹವಾಮಾನ ಬದಲಾವಣೆ ಅತಿ ದೊಡ್ಡ ಸವಾಲಾಗಿದ್ದುಉತ್ತರ ಕನ್ನಡದ ಶಿರೂರುಕೇರಳದ ವೈಯನಾಡು ಭಾಗದಲ್ಲಿ ಸಂಭವಿಸಿದ ಭೂ ಕುಸಿತ ನಮಗೆಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಎಲ್ಲರೂ ಜಾಗೃತರಾಗಲು ಇದು ಸಕಾಲ.  ಗಾಳಿನೀರಿನಲ್ಲಿ ಮಾಲೀನ್ಯ ಹೆಚ್ಚಾಗುತ್ತಿದ್ದುಇತ್ತೀಚೆಗೆ ಎಲೆಕ್ಟ್ರಾನಿಕ್ಬ್ಯಾಟರಿನಿರ್ಮಾಣಕೈಗಾರಿಕಾ ಮಾಲೀನ್ಯ ಸಹ ತೀವ್ರಗೊಳ್ಳುತ್ತಿದೆ. ಜಗತ್ತಿಗೆ ಮಾರಕವಾಗಿರುವ ಈ ಮಾಲೀನ್ಯದ ವಿರುದ್ಧ ಇಡೀ ಮನುಕುಲ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಕೃತಿಪರಿಸರ ಉಳಿದರೆ ಮಾತ್ರ ಜೀವನಜೀವನೋಪಾಯ ಎರಡೂ ರಕ್ಷಿಸಲು ಸಾಧ್ಯಅಭಿವೃದ್ಧಿಗೆ ತೊಡಕಾಗದಂತೆಉತ್ಪಾದನೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಸಂಸ್ಕರಣಾ ವಲಯದಲ್ಲಿ ಯುವ ಸಮೂಹಕ್ಕೆ ಉದ್ಯೋಗ ಸೃಜನೆ ಮಾಡಲು ಈ ವಲಯದಲ್ಲಿ ವಿಪುಲ ಅವಕಾಶವಿದೆ ಎಂದು ಹೇಳಿದರು.

                             

 

ರೀ ಎಕ್ಸ್ ಪೋ ಆಯೋಜಕರು ಮತ್ತು ಉರ್ಧ್ಯ ಮ್ಯಾನೇಜ್ ಮೆಂಟ್ ಪ್ರವೈಟ್ ಲಿಮಿಟೆಡ್ ನ ಸಿಇಒ ವೆಂಕಟರೆಡ್ಡಿ ಡಿ ಪಾಟೀಲ್ ಮಾತನಾಡಿ, ಸಂಸ್ಕರಣೆಯನ್ನು ಬಲಪಡಿಸುವುದು ನಮ್ಮ ಮೂಲ ಧ್ಯೇಯವಾಗಿದ್ದುಈ ನಿಟ್ಟಿನಲ್ಲಿ ಪಾಲುದಾರರ ಸಂಖ್ಯೆ ಹೆಚ್ಚಾಗಬೇಕು. ಮೊಬೈಲ್ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ಮರು ಸಂಸ್ಕರಣೆ ಮಾಡಿ ಮರು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಜ್ಜುಗೊಳಿಸಬೇಕಾಗಿದೆ. ಲ್ಯಾಪ್ ಟಾಪ್ ಗಳು ಶಿಕ್ಷಣಉದ್ಯೋಗ ಸೃಜನೆಗೆ ಅತ್ಯಂತ ಅಗತ್ಯವಾಗಿರುವ ಸಾಧನಗಳಾಗಿವೆ ಎಂದರು.


Post a Comment

0Comments

Post a Comment (0)