ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರಿಗೆ ಸೋದರಿ ವಿಯೋಗ

varthajala
0

 ಬೆಂಗಳೂರುಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಶಿಯವರ ಹಿರಿಯಕ್ಕರಾದ ರೇಣುಕಾ ಕುರ್ತಕೋಟಿಯವರುತಮ್ಮ 83ನೇ  ವಯಸ್ಸಿನಲ್ಲಿವಯೋಸಹಜ ಕಾರಣಗಳಿಂದ ಇಂದು (26 ಜುಲೈಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಜೋಶಿ ಕುಟುಂಬವು ತನ್ನ  ಹಿರಿಯರಾದ ತಂದೆಯವರನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಕಳೆದು ಕೊಂಡಾಗಬಾಳ ದೋಣಿಯ ಹುಟ್ಟನ್ನು ಹಿಡಿದು ಸಮರ್ಥವಾಗಿ ಸಂಸಾರವನ್ನು ದಡ ಸೇರಿಸಿದ ದಿಟ್ಟತನ ಅವರದುವಿವಾಹ ನಂತರ ಪತಿಯ ಗೃಹದಲ್ಲಿಯೂ ದಕ್ಷತೆಯಿಂದ ಸಂಸಾರವನ್ನು ನಡೆಸಿ ಆದರ್ಶ ಗೃಹಿಣಿ ಎನ್ನಿಸಿ ಕೊಂಡು ಇಡೀ ಸಮೂಹಕ್ಕೆ ಮಾದರಿ ಎನ್ನಿಸಿ ಕೊಂಡಿದ್ದರು.

ರೇಣುಕಾ ಕುರ್ತಕೋಟಿಯವರು ಕೆನರಾ ಬ್ಯಾಂಕನಲ್ಲಿ ವಲಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದರುಪತಿ ಲಿಂಗರಾಜ್ ಕುರ್ತಕೋಟಿ, 4 ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ ಸೇರಿದಂತೆ ಮೂವರು ತಮ್ಮಂದಿರುತಂಗಿ ಜೊತೆಗೆ ಅಪಾರ  ಬಂಧು ಬಳಗದವರನ್ನು  ಅಗಲಿದ್ದಾರೆ.

ಎನ್.ಎಸ್ಶ್ರೀಧರ ಮೂರ್ತಿ
ಸಂಚಾಲಕರುಪ್ರಕಟಣಾ ವಿಭಾಗ


Post a Comment

0Comments

Post a Comment (0)