ಭಾರತೀಯ ವೈದ್ಯಕೀಯ ಸಂಘದಿಂದ ವೈದ್ಯರ ದಿನ ಆಚರಣೆ ; ರೋಗಿಗಳ ಆರೈಕೆಯಲ್ಲಿ ವೈದ್ಯರ ಪಾತ್ರ ಅನನ್ಯ – ಡಾ.ಸಿ.ಎನ್. ಮಂಜುನಾಥ್

varthajala
0

 ಬೆಂಗಳೂರು; ರೋಗಿಗಳ ರಕ್ಷಣೆಯಲ್ಲಿ ವೈದ್ಯರ ಪಾತ್ರ ಅನನ್ಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಮತ್ತು ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಯುನೈಟೆಡ್ ಹಾಸ್ಪಿಟಲ್ ಜಯನಗರದ ಸಹಯೋಗದೊಂದಿಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಿಂದ ಆಯೋಜಿಸಲಾದ ವೈದ್ಯರ ದಿನ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಪರಿಸ್ಥಿತಿಗೆ ತಕ್ಕಂತೆ ರೋಗಿಗಳ ಆರೈಕೆ ಮತ್ತು ಚಿಕಿತ್ಸೆ ನೀಡುವುದು ವೈದ್ಯರ ಪರಮ ಕರ್ತವ್ಯ. ರೋಗಿಗಳಲ್ಲಿ ಸಂತಸ ಮೂಡಿಸುವುದೇ ನಿಜವಾದ ವೈದ್ಯರ ಕರ್ತವ್ಯ ಎಂದರು.

ಸಮಾರಂಭದಲ್ಲಿ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಗೌರವಾಧ್ಯಕ್ಷ ಡಾ.ವೈ.ಸಿ.ಯೋಗಾನಂದ ರೆಡ್ಡಿ, ಐಎಂಎ ಬೆಂಗಳೂರು ಶಾಖೆಯ ಅಧ್ಯಕ್ಷ ಡಾ. ಮಧುಶಂಕರ್ ಎಲ್, ಡಾ. ಮೋಹನ್ ಕುಮಾರ್ ಎಂ. ಕಾರ್ಯದರ್ಶಿ, ಡಾ. ಅನಾಥರಾಮಯ್ಯ,ಟಿ. ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ  ಡಾ ವಿಕ್ರಮ್ ಸಿದ್ದಾರೆಡ್ಡಿ, ಸಿಓಓ ಕರ್ನಲ್ ರಾಕೇಶ್ ಭಾರದ್ವಾಜ್, ಡಾ.ರಾಜೀವ್ ಭಾಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Post a Comment

0Comments

Post a Comment (0)