'ಸಿಂಗಪುರ ವಿಶ್ವ ಕನ್ನಡ ಹಬ್ಬದ ನಿರೂಪಕರಾಗಿ ನಟ ನಿರಂಜನ್ ದೇಶಪಾಂಡೆ ನೇಮಕ...

varthajala
0

 'ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್' ದಿನಾಂಕ 28-09-2024 ರಂದು ಸಿಂಗಪುರದಲ್ಲಿ ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವ,  'ವಿಶ್ವ ಕನ್ನಡ ಹಬ್ಬ'ದ ನಿರೂಪಕರಾಗಿ ಖ್ಯಾತ ನಟ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆಯವರನ್ನು ನೇಮಕ ಮಾಡಿ, ಆದೇಶ ಪತ್ರ ನೀಡುವ ಮೂಲಕ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು ಅಭಿನಂದನೆಗಳನ್ನು ತಿಳಿಸಿದರು. ನಿರಂಜನ್ ದೇಶಪಾಂಡೆಯವರು ಅತ್ಯುತ್ತಮ ನಟರಾಗಿ, ಜೊತೆಗೆ ಉತ್ತಮ ನಿರೂಪಕರಾಗಿ ಪ್ರಸಿದ್ಧ ವಾಹಿನಿಗಳಲ್ಲಿ ವಿಶೇಷ ಸಂಚಿಕೆಗಳನ್ನು ನಿರೂಪಣೆ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕನ್ನಡ ಭಾಷೆಯನ್ನು ಸ್ವಚ್ಛವಾಗಿ ಮಾತನಾಡುವ ಕೌಶಲ್ಯ  ಹೊಂದಿದ್ದಾರೆ. 

ಇವರು ಈ ಸುಂದರ ಸಂದರ್ಭವನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸದಾ ಕನ್ನಡ ಭಾಷೆಯನ್ನು ಗೌರವಿಸುವ ಹಾಗೂ ಎಲ್ಲಡೆ ಪಸರಿಸುವ ಉದ್ದೇಶ ಹೊಂದಿದ್ದು, ಸಿಂಗಪುರದಲ್ಲಿ ಆಚರಿಸುತ್ತಿರುವ ವಿಶ್ವ ಕನ್ನಡ ಹಬ್ಬಕ್ಕೆ ನನ್ನನ್ನು ನಿರೂಪಕನಾಗಿ ಆಯ್ಕೆ ಮಾಡಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಆಯ್ಕೆ ಮಾಡಿದ ವಿಶ್ವ ಕನ್ನಡ ಹಬ್ಬದ ಸಲಹಾ ಸಮಿತಿಗೆ ನನ್ನ ಧನ್ಯವಾದಗಳು. ಎಲ್ಲರೂ ಒಟ್ಟಾಗಿ ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು. ಈ ಸಂದರ್ಭದಲ್ಲಿ ವಿಶ್ವ ಕನ್ನಡ ಹಬ್ಬದ ಮಹಾ ನಿರ್ದೇಶಕರಾದ ಪ್ರತಿಭಾ ಪಟವರ್ಧನ್, ರೇಣುಕಾನಂದ, ಕಾವ್ಯ ಸೇರಿದಂತೆ ಇನ್ನೂ ಹಲವರು ಜೊತೆಗಿದ್ದರು.


Post a Comment

0Comments

Post a Comment (0)