ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಪುರ ದಲ್ಲಿ ಸೆಪ್ಟೆಂಬರ್ 28ರಂದು ಆಯೋಜಿಸಲಾಗಿದೆ.

varthajala
0

 ಭಾರತದ ಪ್ರತಿಷ್ಠಿತ ಇಸ್ರೋ ವಿಜ್ಞಾನಿ ಶ್ರೀ. ಕಿರಣ್ ಕುಮಾರ್ ರವರಿಗೆ "ವಿಶ್ವ ಮಾನವ ಪ್ರಶಸ್ತಿ"  ಕರುನಾಡಿನ ಮತ್ತು ಭಾರತ ದೇಶದ ವಿಶಿಷ್ಟ ಸಾಧಕರಿಗೆ  " ವಿಶ್ವ ಮಾನ್ಯ ಪ್ರಶಸ್ತಿ " ಯನ್ನು ನೀಡಿ ಗೌರವಿಸಲಾಗುವುದು. ಕರ್ನಾಟಕದ ಸಾಂಸ್ಕೃತಿಕ ಪ್ರತೀಕವಾದ ಸಾಹಿತ್ಯ ಸಂಗೀತ, ಭರತನಾಟ್ಯ, ಯಕ್ಷಗಾನ, ಕವಿ ಗೋಷ್ಠಿ ಇದರೊಂದಿಗೆ ಬಿಸಿ ಕಲೆಗಳಾದ ಜಾನಪದ ನೃತ್ಯ ಜಾನಪದ ಗೀತೆ, ಗಾಯನ ಹಾಗೂ ವಿಶೇಷವಾಗಿ ಸಿದ್ಧಿ ಜನಾಂಗದ ಕಲಾವಿದರು ತಮ್ಮ ಕಲಾ ನೈಪುಣ್ಯತೆಯನ್ನು ಸಿಂಗಾಪುರದ ಎರಡನೇ ವಿಶ್ವಕನ್ನಡ ಹಬ್ಬದ  ವೇದಿಕೆಯಲ್ಲಿ ಪ್ರದರ್ಶನ ಮಾಡಲಿದ್ದಾರೆ.



ಈಗಾಗಲೇ ದುಬೈ ನಲ್ಲಿ ಮೊದಲನೇ ವಿಶ್ವ ಕನ್ನಡ ಹಬ್ಬವು ಅತ್ಯಂತ ಯಶಸ್ವಿಯಾಗಿ ನಡೆದಿರುವ ಹಿನ್ನೆಲೆಯಲ್ಲಿ ಎರಡನೇ ವಿಶ್ವಕನ್ನಡ ಹಬ್ಬದ ಬಗ್ಗೆ ಹೊರ ದೇಶಗಳ ಕನ್ನಡಿಗರಲ್ಲಿ ಅಪಾರವಾದ ಆಸಕ್ತಿ ಹುಟ್ಟಿಕೊಂಡಿದೆ.

ಪ್ರಸ್ತುತ ಎರಡನೇ ವಿಶ್ವಕನ್ನಡ ಹಬ್ಬದ ಸಮಗ್ರ ವಿಚಾರಧಾರೆಗಳನ್ನು ಪತ್ರಿಕೆ ದೃಶ್ಯ ಮಾಧ್ಯಮದ ಹಾಗೂ ಅಂತರ್ಜಾಲ ಮಾಧ್ಯಮ ಎಲ್ಲಾ ಸಮಿತ್ರರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಂಗಳವಾರ ದಿನಾಂಕ 16.7.24 ರಂದು ಮಾಗಡಿ ರಸ್ತೆಯ " ಜಿ.ಟಿ ವರ್ಲ್ಡ್ ಮಾಲ್" ನಲ್ಲಿ  ಮಧ್ಯಾಹ್ನ 3. 30 ಗಂಟೆಗೆ ಆಯೋಜಿಸಲಾಗಿದೆ.

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಮಸ್ತ ಕನ್ನಡಿಗರ ಪರವಾಗಿ ಸಿಂಗಾಪುರ್ ವಿಶ್ವ ಕನ್ನಡ ಹಬ್ಬಕ್ಕೆ ಆಗಮಿಸುತ್ತಿರುವುದು ಕರುನಾಡಿನ ಹೆಮ್ಮೆಯ ಪ್ರತೀಕವಾಗಿದೆ..

ಧಾರ್ಮಿಕ ಗುರುಗಳಾದ ಶ್ರೀ ಆನಂದ ಗುರೂಜಿ,ಎರಡನೇ ವಿಶ್ವಕನ್ನಡ ಹಬ್ಬದ ರಾಯಭಾರಿ ಖ್ಯಾತ ನಟ ಶ್ರೀ ವಶಿಷ್ಟ ಸಿಂಹ ಮತ್ತು ಖ್ಯಾತ ನಟಿ ಹರಿಪ್ರಿಯಾ, ಮತ್ತು ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ವಿಶ್ವಕನ್ನಡ ಹಬ್ಬದ ಆಯೋಜಕರಾದ ಡಾಕ್ಟರ್ ಟಿ. ಶಿವಕುಮಾರ ನಾಗರನವಿಲೆ ಮುಂತಾದವರು ಮತ್ತು ಎರಡನೇ ವಿಶ್ವಕನ್ನಡ ಹಬ್ಬದ ಎಲ್ಲಾ ಪದಾಧಿಕಾರಿಗಳು ಸಂಚಾಲಕರು ಭಾಗವಹಿಸುತ್ತಿದ್ದಾರೆ

ಸಿಂಗಾಪುರದ ಎರಡನೇ ವಿಶ್ವಕನ್ನಡ ಹಬ್ಬದ ಕುರಿತಾಗಿ ಅನೇಕ ಮಾಹಿತಿಗಳನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಈ ಪತ್ರಿಕಾಗೋಷ್ಠಿಯನ್ನು ಆಯೋಜಿಸ್ಸಿದ್ದು.. ಪತ್ರಿಕೆ ದೃಶ್ಯ ಮಾಧ್ಯಮ ಹಾಗೂ ಅಂತರ್ಜಾಲ ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿಶ್ವ ಕನ್ನಡ ಹಬ್ಬ ಯಶಸ್ವಿಯಾಗಲು  ಸಹಕರಿಸಬೇಕಾಗಿ ವಿನಂತಿ.

Post a Comment

0Comments

Post a Comment (0)