ಈ ಸಮಯದಲ್ಲಿ ಫೊಂಡಾ, ಗೋವಾದಲ್ಲಿ ನಡೆಯುವ 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಪ್ರಯುಕ್ತ

varthajala
0

 ಪ್ರಸ್ತಾವನೆ : ನೂರಾರು ವರ್ಷಗಳ ಸುಧೀರ್ಘ ಸಂಘರ್ಷದ ನಂತರ ಕೊನೆಗೆ ಜನವರಿ ೨೦೨೪ ರಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ವಿರಾಜಮಾನರಾದರು. ಪ್ರಭು ಶ್ರೀರಾಮ ಅಯೋಧ್ಯಾಪತಿಯಾದ ನಂತರ ಪೃಥ್ವಿಯಲ್ಲಿ ರಾಮರಾಜ್ಯ ಅವತರಿಸಿತ್ತು. ಶ್ರೀರಾಮ ಮಂದಿರದ ನಿರ್ಮಾಣದ ನಂತರ ಈಗ ಹಿಂದೂಗಳ ಮನದಲ್ಲಿ ರಾಮರಾಜ್ಯ ರೂಪಿ ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯಾಸ ತಗಲಿದೆ. ಕೆಲವು ವರ್ಷಗಳ ಹಿಂದೆ ‘ಹಿಂದೂ ರಾಷ್ಟ್ರ’ ಈ ಶಬ್ದದ ಉಚ್ಚಾರಣೆಯೂ ಅಪರಾಧವೆಂಬ ಪರಿಸ್ಥಿತಿಯಿತ್ತು; ಆದರೆ ಈಗ ಹಿಂದೂ ರಾಷ್ಟ್ರದ ಚರ್ಚೆ ಕೇವಲ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಕೇಳಿ ಬರುತ್ತಿದೆ. ಇದು ಕಾಲದ ಮಹಿಮೆಯೇ ಆಗಿದೆ. ಯಾವುದಾದರೂ ಘಟನೆ ಸ್ಥೂಲದಲ್ಲಿ ಘಟಿಸುವ ಮೊದಲು ಸೂಕ್ಷ್ಮದಲ್ಲಿ ಘಟಿಸಿರುತ್ತದೆ, ಎಂದು ಶಾಸ್ತ್ರ ಹೇಳುತ್ತದೆ. ರಾಮಾಯಣ ಘಟಿಸುವ ಮೊದಲೇ ಅದನ್ನು ವಾಲ್ಮೀಕಿ ಋಷಿಗಳು ಬರೆದಿದ್ದರು. ಶ್ರೀರಾಮ ಮಂದಿರದ ನಿರ್ಮಾಣವೆಂದರೆ ಸೂಕ್ಷ್ಮದಲ್ಲಿ ರಾಮರಾಜ್ಯದ ಅಂದರೆ ‘ಹಿಂದೂ ರಾಷ್ಟ್ರ’ದ ಪ್ರಾರಂಭವೇ ಆಗಿದೆ. ಯಾವ ಶ್ರೀರಾಮನಿಗಾಗಿ ವಿಶ್ವಾದ್ಯಂತದ ಹಿಂದೂ ಭಕ್ತರು ಜಾತಿ-ಪಂಥ-ಪಕ್ಷ-ಸಂಪ್ರದಾಯ ಮುಂತಾದ ಎಲ್ಲಾ ಭೇದಗಳನ್ನು ಮರೆತು ಉತ್ಸಾಹದಲ್ಲಿ ಒಂದಾದರೋ, ಅದೇ ರೀತಿಯ ಸಂಘಟನೆ, ಸಮರ್ಪಣೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಗಬೇಕಿದೆ. ರಾಮರಾಜ್ಯರೂಪಿ ಹಿಂದೂ ರಾಷ್ಟ್ರಕ್ಕಾಗಿ ಆರಂಭವಾಗುತ್ತಿರುವ ಜನಾಂದೋಲನವು ಯಥಾಶೀಘ್ರ ಸಂಪೂರ್ಣವಾಗಿ ಸಫಲವಾಗಬೇಕೆಂದು ಪ್ರಾರ್ಥನೆ !




ಹಿಂದೂ ರಾಷ್ಟ್ರದ ಪರಿಕಲ್ಪನೆ : ಹಿಂದೂ ರಾಷ್ಟ್ರದ ಪರಿಕಲ್ಪನೆ ಇದು ರಾಜಕೀಯವಲ್ಲ, ಧರ್ಮಾಧಿಷ್ಠಿತವಾಗಿದೆ. ಕೇವಲ ’ಸೆಕ್ಯುಲರ್’ ಪದದ ಬದಲು ‘ಹಿಂದೂ ರಾಷ್ಟ್ರ’ ಈ ಶಬ್ದ ಸಂವಿಧಾನದಲ್ಲಿ ಸೇರಿಸುವುದಷ್ಟಕ್ಕೆ ಸೀಮಿತವಾಗಿಲ್ಲ, ಹಿಂದೂ ರಾಷ್ಟ್ರ ಇದು ಒಂದು ಆದರ್ಶ ರಾಜ್ಯ ವ್ಯವಸ್ಥೆಯಾಗಿದೆ. ಆದರ್ಶ ರಾಜ್ಯ ವ್ಯವಸ್ಥೆಯ ಮಾನದಂಡ ರಾಮ ರಾಜ್ಯದಲ್ಲಿ ಹಾಕಿ ಕೊಡಲಾಗಿದೆ. ಇಂದು ಲಕ್ಷಾಂತರ ವರ್ಷ ಕಳೆದರೂ, ತ್ರೇತಾಯುಗದ ರಾಮರಾಜ್ಯ ’ಜನರಿಗೆ ನೆನಪಿದೆ; ಯಾಕೆಂದರೆ ಆಗ ಧಾರ್ಮಿಕ ಅಧಿಷ್ಠಾನವಿತ್ತು. ಆದ್ದರಿಂದ ರಾಮರಾಜ್ಯದಲ್ಲಿನ ನಾಗರಿಕರು ಸುಸಂಸ್ಕೃತರು, ಸುಖಿಗಳು ಮತ್ತು ಸಮಾಧಾನಿಗಳಾಗಿದ್ದರು. ಅಲ್ಲಿ ಭ್ರಷ್ಟಾಚಾರ, ರೋಗರುಜಿನ, ನೈಸರ್ಗಿಕ ಆಪತ್ತು ಮುಂತಾದವುಗಳಿಗೆ ಅವಕಾಶ ಇರಲಿಲ್ಲ. ’ಶ್ರೀ ರಾಮನ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಕುಂದು ಕೊರತೆ ನೋಡಲು ಸಿಗಲಿಲ್ಲ, ಹೀಗೆ ರಾಮ ರಾಜ್ಯದ ವರ್ಣನೆ ವಾಲ್ಮೀಕಿ ಋಷಿಗಳು ರಾಮಾಯಣದಲ್ಲಿನ ಯುದ್ಧಕಾಂಡದಲ್ಲಿ ಬರೆದಿಟ್ಟಿದ್ದಾರೆ. ಇಂತಹ ರಾಮರಾಜ್ಯ ಆಗಿಹೋಗಿರುವ ಈ ಪವಿತ್ರ ಭೂಮಿಯಲ್ಲಿ ಪುನಃ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಜಯಘೋಷ ಮೊಳಗಿಸಲು ಕಳೆದ ೧೧ ವರ್ಷಗಳಿಂದ ’ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ’ ಪ್ರಯತ್ನಿಸಲಾಗುತ್ತಿದೆ. ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳ ರಾಷ್ಟ್ರ ಅಲ್ಲ, ಅದು ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸಾತ್ತ್ವಿಕ ಜನರ ರಾಷ್ಟ್ರ !

ಹಿಂದೂ ರಾಷ್ಟ್ರದ ಆವಶ್ಯಕತೆ : ಇಂದಿನ ಸೆಕ್ಯುಲರ್ (ಜಾತ್ಯಾತೀತ) ವ್ಯವಸ್ಥೆ ಹಿಂದೂಗಳ ದಮನ ಮಾಡುವ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವಂತಹದ್ದಾಗಿದೆ. ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಲಾಗುತ್ತಿದೆ. ದೇವಸ್ಥಾನಗಳ ದೇವನಿಧಿಯನ್ನು ಇತರೆ ಪಂಥದವರಿಗಾಗಿ ಉಪಯೋಗಿಸಲಾಗುತ್ತಿದೆ; ಆದರೆ ಇತರೆ ಪಂಥದವರ ಪ್ರಾರ್ಥನಾಸ್ಥಳಗಳ ಸರಕಾರೀಕರಣವಾಗುವುದಿಲ್ಲ. ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವರು-ದೇಶ- ಧರ್ಮದ ರಕ್ಷಣೆಗಾಗಿ ಜಾಗೃತಿಗೊಳಿಸುವುದೆಂದರೆ ‘ಹೇಟ್ ಸ್ಪೀಚ್’ ಎಂದು ಪರಿಗಣಿಸುವ ಘಟನೆಗಳು ನಡೆಯುತ್ತವೆ; ಆದರೆ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕುಷ್ಠರೋಗಗಳೊಂದಿಗೆ ಹೋಲಿಕೆ ಮಾಡಿ ಸನಾತನ ಧರ್ಮವನ್ನು ನಷ್ಟ ಮಾಡಬೇಕೆಂದು ಹೇಳಿಕೆ ನೀಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ. ಸೆಕ್ಯುಲರ್ ವ್ಯವಸ್ಥೆಯಲ್ಲಿ ಇತರೆ ಪಂಥದವರಿಗೆ ಸರಕಾರಿ ಅನುದಾನದಿಂದ ಅವರ ಧರ್ಮಾನುಸಾರ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ; ಆದರೆ ಈ ದೇಶದಲ್ಲಿ ೧೦೦ ಕೋಟಿ ಜನಸಂಖ್ಯೆ ಹೊಂದಿರುವ ಹಿಂದೂಗಳಿಗೆ ಮಾತ್ರ ಆ ಅವಕಾಶವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟಿಸುತ್ತಿರುವ ಕೋಟ್ಯಾವಧಿ ಬಾಂಗ್ಲಾದೇಶಿ ಮತ್ತು ಲಕ್ಷಾಂತರ ರೋಹಿಂಗ್ಯಾ ನುಸುಳುಕೋರರ ಬಗ್ಗೆ ಮೌನವಾಗಿರುತ್ತಾರೆ. ಇಂದಿಗೂ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಬದಾಯುನಲ್ಲಿ ಮತಾಂಧನು ೨ ಹಿಂದೂ ಬಾಲಕರ ಕತ್ತು ಕೊಯ್ದು ಹತ್ಯೆ ಮಾಡಿರುವ ಭೀಕರ ಘಟನೆ ಬಹಿರಂಗವಾಗಿದೆ. ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿರುವಾಗ ಪೊಲೀಸರ ಸಂಘರ್ಷಣೆಯಲ್ಲಿ ಅಪರಾಧಿ ಮತಾಂಧನು ಮರಣ ಹೊಂದಿದಾಗ ಅವನ ಅಂತ್ಯಕ್ರಿಯೆಗೆ  ೩೦ ಸಾವಿರಕ್ಕಿಂತ ಅಧಿಕ ಆ ಸಮುದಾಯದ ಜನರು ಜಮಾಯಿಸಿದ್ದರು. ಇದು ದೇಶಕ್ಕೆ ಅಪಾಯದ ಗಂಟೆಯಾಗಿದೆ. ‘ಲವ್ ಜಿಹಾದ್’, ‘ಹಲಾಲ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಮುಂತಾದ ಮಾಧ್ಯಮಗಳಿಂದ ಭಾರತ ಮತ್ತು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗೆ ‘ಇತ್ತೇಹಾದ್ ಮಿಲ್ಲತ್ ಕೌನ್ಸಿಲ್’ನ ಮುಖ್ಯಸ್ಥ ಮೌಲಾನಾ ತೌಕೀರ್ ಮಾತನಾಡಿ ‘ಮುಸಲ್ಮಾನ ಯುವಕರು ನಿಯಂತ್ರಣ ತಪ್ಪಿದರೆ, ದೇಶದಲ್ಲಿ ಆಂತರಿಕ ಯುದ್ಧ ಸಂಭವಿಸಬಹುದು’, ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದನು. ದಕ್ಷಿಣ ಏಷ್ಯಾದ ದೊಡ್ಡ ಶಿಕ್ಷಣ ಸಂಸ್ಥೆಯಾಗಿರುವ ‘ದಾರುಲ್ ಉಲುಮ್ ದೇವಬಂದ್’ ಇದು ಭಾರತವನ್ನು ‘ಗಝವಾ-ಎ- ಹಿಂದ್’ ಮಾಡುವ ಅರ್ಥಾತ್ ಭಾರತವನ್ನು ಇಸ್ಲಾಮೀಕರಣಗೊಳಿಸುವ ಫತ್ವಾ ಹೊರಡಿಸಿದೆ. ಈ ಎಲ್ಲ ಘಟನೆಗಳು ಜಾತ್ಯಾತೀತ ವ್ಯವಸ್ಥೆಯ ಸೋಲನ್ನು ಪ್ರತಿಬಿಂಬಿಸುತ್ತದೆ ಮತ್ತು ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ಬಿಂಬಿಸುತ್ತಿದೆ. ಹಿಂದೂ ಧರ್ಮ, ಹಾಗೆಯೇ ರಾಷ್ಟ್ರದ ಮೇಲಾಗುವ ಆಘಾತಗಳಿಗೆ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯೊಂದೇ ಏಕಮೇವ ಉತ್ತರವಾಗಿದೆ. ಹೇಗೆ ‘ಹಿಂದವೀ ಸ್ವರಾಜ್ಯ’ ಸ್ಥಾಪನೆಯಾದ ಬಳಿಕ ಇಸ್ಲಾಮಿ ಅತಿಕ್ರಮಣ ಕೊನೆಗೊಂಡಿತೋ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೇ ಸದ್ಯದ ಅರಾಜಕತೆ ನಿಲ್ಲುವುದು ಖಚಿತವಾಗಿದೆ. ಈ ಸಲ  ಜೂನ್ ೨೪ ರಿಂದ ೩೦ ರ ಕಾಲಾವಧಿಯಲ್ಲಿ ಗೋವಾದ ಫೋಂಡಾದಲ್ಲಿ ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಅಂದರೆ ಹನ್ನೆರಡನೇ ’ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ನಡೆಯಲಿದೆ. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ತಿತಿತಿ.hiಟಿಜuರಿಚಿgಡಿuಣi.oಡಿg ಈ ಜಾಲತಾಣದಿಂದ  ಆನ್‌ಲೈನ್ ವೀಕ್ಷಿಸಬಹುದು.

Post a Comment

0Comments

Post a Comment (0)