ವಿಶ್ವ ರಕ್ತದಾನಿಗಳ ದಿನಾಚರಣೆ-2024 ಆಯೋಜನೆ

varthajala
0
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ನಗರ ಜಿಲ್ಲೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಎಮ್ ಎಲ್ ಎ ಅಕಾಡಮಿ ಆಫ್ ಹೈಯರ್ ಲರ್ನಿಂಗ್ ಕಾಲೇಜು ಮಲ್ಲೇಶ್ವರಂ ಇವರ ಸಹಯೋಗದಲ್ಲಿ ಎಲ್ ಎ ಅಕಾಡಮಿ ಆಫ್ ಹೈಯರ್ ಲರ್ನಿಂಗ್ ಕಾಲೇಜು ಮಲ್ಲೇಶ್ವರಂ ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ - 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಪಾಲ್ಗೊಂಡು ಉದ್ಘಾಟನೆ ಮಾಡಿದರು. ಸ್ಥಳೀಯ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗಳಾದ ಸಿ ಎನ್ ಅಶ್ವಥ್ ನಾರಾಯಣ ಮಹಾಲಕ್ಷ್ಮಿ ಲೇಔಟ್ ವಿಕಲಚೇತನರ ಅಧ್ಯಕ್ಷ ಗುಣಶೇಖರ್, ಮಲ್ಲಿಕಾರ್ಜುನ ಹಿರೇಮಠ, ಬಾಲಕೃಷ್ಣ ಸೇರಿದಂತೆ ಅರೋಗ್ಯ ಇಲಾಖೆಯ ಅಧಿಕಾರಿಗಳು ಕಾಲೇಜು ಸಿಬ್ಬಂದಿ ಮತ್ತು ರೆಡ್ ಕ್ರಾಸ್ ಸಂಸ್ಥೆ ಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಕಲಚೇತನರ ಅಧ್ಯಕ್ಷ ಗುಣಶೇಖರ್, ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

Post a Comment

0Comments

Post a Comment (0)