ಸಂತ್ರಸ್ತರು ಮತ್ತು ಬಾತ್ಮೀದಾರರ ನೆರವಿಗೆ ಸಹಾಯವಾಣಿ

varthajala
0

 ಬೆಂಗಳೂರು, ಮೇ 06 (ಕರ್ನಾಟಕ ವಾರ್ತೆ):

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ಈಗಾಗಲೇ ವಿಷೇಷ ತನಿಖಾ ತಂಡ (ಎಸ್‍ಐಟಿ)ವನ್ನು ರಚಿಸಲಾಗಿದ್ದು, ತನಿಖಾ ಕಾಲದಲ್ಲಿ. 

ಈ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಸಂತ್ರಸ್ತರಿರುವುದು ತಿಳಿದುಬಂದಿದ್ದು, ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ: 6360938947 ಗೆ ಕರೆ ಮಾಡಬಹುದಾಗಿದೆ. ಸಂತ್ರಸ್ತರ ಅಥವಾ ಬಾತ್ಮೀದಾರರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)