ಪ್ರಪ್ರಥಮ ಬಾರಿಗೆ ಮಲ್ಲೇಶ್ವರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಾಸರ ಪದಗಳ ಅಂತ್ಯಾಕ್ಷರಿ

varthajala
0

 ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನೋತ್ಸವದ ಪ್ರಯುಕ್ತ ಫೆಬ್ರವರಿ 3 ರಂದು ಏರ್ಪಡಿಸಿದ್ದ "ದಾಸರ ಪದಗಳ ಅಂತ್ಯಾಕ್ಷರಿ" ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಕಲಾವಿದರುಗಳಾದ ವಿ||  ರಾಯಚೂರು ಶೇಷಗಿರಿದಾಸ್, ವಿ|| ಭಾರ್ಗವಿ ಗುಡಿ, ವಿ|| ಅನಂತ ಕುಲಕರ್ಣಿ, ವಿ|| ದಿವ್ಯಾ ಗಿರಿಧರ್ ಮತ್ತು ಸಂಗಡಿಗರು ನಡೆಸಿಕೊಟ್ಟರು.




 ಈ ಕಾರ್ಯಕ್ರಮದ ನಿರೂಪಣೆಯನ್ನು ಹರಿದಾಸ ಸಂಪದ ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಎಂ. ವಿ. ಮಧುಸೂದನ್ ನಿರ್ವಹಿಸಿದರು. ಮಲ್ಲೇಶ್ವರದಲ್ಲಿ ಪ್ರಪ್ರಥಮವಾಗಿ ಆಯೋಜಿಸಿದ್ದ ಈ ವಿಶೇಷ  ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯಾಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಈ ಕಾರ್ಯಕ್ರಮದ ನೇತೃತ್ವವನ್ನು ವಿ|| ಅನಂತಕುಲಕರ್ಣಿ ಅವರು ವಹಿಸಿದ್ದರು.

Post a Comment

0Comments

Post a Comment (0)