ಜಗದೀಶ್ ವಿಜ್ಞಾನ ಕೇಂದ್ರ &ನೆಹರು ತಾರಾಲಯ ಸಹಯೋಗದಲ್ಲಿ ಸೈನ್ಸ್ ಇನ್ ಆಕ್ಷನ್ Science in Action ವಿಜ್ಞಾನೋತ್ಸವಕ್ಕೆ ಚಾಲನೆ

varthajala
0









ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಚಂದ್ರಯಾನ -3 ರ ಮಾದರಿಗಳುರಾತ್ರಿ ವೇಳೆ ಬಾಹ್ಯಾಕಾಶ ವೀಕ್ಷಣೆ ಸೇರಿ ಉತ್ಸವದಲ್ಲಿ ಹಲವು ವಿಶೇಷತೆಗಳು

 

ಬೆಂಗಳೂರುಸೆ, 29; ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ತಾರಾಲಯ ಸಹಯೋಗದಡಿ ಜಯನಗರ ನ್ಯಾಷನಲ್ ಕಾಲೇಜು ಆವರಣದಲ್ಲಿ ಎರಡು ದಿನಗಳ  [ಶನಿವಾರ ಮತ್ತು ಭಾನುವಾರ]  “ಸೈನ್ಸ್ ಇನ್ ಆಕ್ಷನ್” ಹೆಸರಿನಡಿ ಬೃಹತ್ ವಿಜ್ಞಾನೋತ್ಸವಕ್ಕೆ ಎನ್.ಎ.ಎಲ್ ವಿಜ್ಞಾನಿ ಡಾ.ವಿ. ಶುಭ ಚಾಲನೆ ನೀಡಿದರು.

 

ನ್ಯಾಷನಲ್ ಕಾಲೇಜಿನಲ್ಲಿ 1968 ರಿಂದ 1972 ರ ವರೆಗೆ ಬಿಎಸ್ಸಿ ಫಿಸಿಕ್ಸ್ ನಲ್ಲಿ ಅಧ್ಯಯನ ಮಾಡಿ ಸ್ವರ್ಣಪದಕ ಗಳಿಸಿದ ವಿದ್ಯಾರ್ಥಿಯೂ ಆಗಿರುವ ಅವರು ಎನ್.ಎ.ಎಲ್ ನಲ್ಲಿ ಫೆಲೋಶಿಪ್ ಪಡೆದು ಪ್ರತಿಷ್ಠಿತ ವಿಜ್ಞಾನಿಯಾಗಿದ್ದಾರೆ. ನಂತರ ಮಾತನಾಡಿದ ಡಾ. ವಿ. ಶುಭತರಗತಿಗಳಲ್ಲಿ ವಿಜ್ಞಾನ ಕಲಿಕೆಗೂಪ್ರಾಯೋಗಿಕ ಕಲಿಕೆಗೂ ವ್ಯತ್ಯಾಸವಿದೆ. ಇಂತಹ ಉತ್ಸವಗಳು ವಿಜ್ಞಾನದೆಡೆಗೆ ಅತೀವ ಆಸಕ್ತಿ ಮೂಡಿಸುತ್ತವೆ. ಶಾಲಾ ಕಾಲೇಜುಗಳಲ್ಲಿ ಇಂತಹ ಉತ್ಸವ ಆಚರಿಸಬೇಕು  ಎಂದರು.

 

 (The National Education society of Karnataka (R)) ದ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕ ದ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ  ಮಾತನಾಡಿಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ವಿಜ್ಞಾನತಂತ್ರಜ್ಞಾನಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣಕ್ಕೆ ಮೀಸಲಾದ ಕ್ರಿಯಾತ್ಮಕ ಮತ್ತು ಸಂವಾದಾತ್ಮಕ ಸಂಸ್ಥೆಯಾಗಿದೆ. ಇಲ್ಲಿ ವಸ್ತು ಸಂಗ್ರಹಾಲಯಡಿ.ಐ.ವೈ ಪ್ರಯೋಗಾಲಯವಿದ್ದುಇದು ಕಲಿಕೆ ಮತ್ತು ಮನೋರಂಜನೆಯ ಕೇಂದ್ರವಾಗಿದೆ. ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಇದರ ಉದ್ದೇಶ ಎಂದರು.

 

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಭಾರತಿ ರಾವ್ ಮಾತನಾಡಿಇಸ್ರೋಇನೋವೇಷನ್ ಅಂಡ್ ಸೈನ್ಸ್ ಪ್ರಮೋಷನ್ ಫೌಂಡೇಷನ್ಪರಂ ಇನ್ನೋವೇಷನ್ ಸೈನ್ಸ್ ಎಕ್ಸ್ ಪೀರಿಯನ್ಸ್ ಸೆಂಟರ್ಕರ್ನಾಟಕ ವಿಜ್ಞಾನತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆಗಳು ಸಹಭಾಗಿತ್ವವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

 

ಬೃಹತ್ ವಿಜ್ಞಾನೋತ್ಸವದಲ್ಲಿ 8,000 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ  ನಿರೀಕ್ಷೆಯಿದೆ. ಮಾನವ ಆಕೃತಿಯ ರೋಬೋಟ್ ಗಳುವಿಜ್ಞಾನದ ಮೂಲ ಸೂತ್ರಗಳ ಆಧಾರಿತ ಮಾದರಿಗಳುಚಂದ್ರಯಾನ -3 ರ ವಾಸ್ತವಿಕ ಮಾದರಿಗಳುಸಂಗೀತರಾತ್ರಿ ವೇಳೆಯಲ್ಲಿ ಬಾಹ್ಯಾಕಾಶ ವೀಕ್ಷಣೆ ಸೇರಿದಂತೆ ಹಲವಾರು ಆಕರ್ಷಣೆಗಳಿವೆ ಎಂದು ಪ್ರೊಫೆಸರ್ ಭಾರತಿ ರಾವ್ ತಿಳಿಸಿದರು.


Post a Comment

0Comments

Post a Comment (0)